ಸಂತೇಬೆನ್ನೂರು | ಶಿಕ್ಷಕನ ಬ್ಯಾಂಕ್ ಖಾತೆಯಿಂದ ₹54,000 ವರ್ಗಾವಣೆ ವಂಚನೆ

ಸಂತೇಬೆನ್ನೂರು | ಶಿಕ್ಷಕನ ಬ್ಯಾಂಕ್ ಖಾತೆಯಿಂದ ₹54,000 ವರ್ಗಾವಣೆ ವಂಚನೆ

ಸಂತೇಬೆನ್ನೂರು | ಶಿಕ್ಷಕನ ಬ್ಯಾಂಕ್ ಖಾತೆಯಿಂದ ₹54,000 ವರ್ಗಾವಣೆ ವಂಚನೆ

ಸಂತೇಬೆನ್ನೂರು: ಇಲ್ಲಿನ ವಿಜಯ ಪ್ರೌಢಶಾಲೆಯ ಶಿಕ್ಷಕ ಜಿ.ಎಸ್.ಜಗದೀಶ್ ಅವರ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಖಾತೆಯಿಂದ ₹54,000ವನ್ನು ಅಪರಿಚಿತ ವ್ಯಕ್ತಿಗಳು ವರ್ಗಾವಣೆ ಮಾಡಿಕೊಂಡಿದ್ದಾರೆ.

ಎಂದಿನಂತೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಮುಂದಾದಾಗ ಖಾತೆಯಲ್ಲಿ ಹಣವಿಲ್ಲದೇ ಇರುವುದನ್ನು ಗಮನಿಸಿ ಆತಂಕಗೊಂಡಿದ್ದಾರೆ. ತಮ್ಮ ಖಾತೆಯಲ್ಲಿ ₹53,000 ಇದ್ದದ್ದನ್ನು ಖಾತರಿ ಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಎಸ್‌ಬಿಐ ಖಾತೆಯಿಂದ ₹53,000 ಮೊತ್ತವನ್ನು ಇವರದೇ ಕೆನರಾ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ ವರ್ಗಾವಣೆ ಆಗಿದೆ. ಆನಂತರ ಕೆನರಾ ಬ್ಯಾಂಕ್‌ನಿಂದ ಮತ್ತೆ ಫೋನ್ ಪೇ ಮೂಲಕ ಬ್ಯಾಂಕ್ ಟು ಬ್ಯಾಂಕ್ ಯುಪಿಐ ಖಾತೆಯಲ್ಲಿ ಇಬ್ಬರಿಗೆ ವರ್ಗಾವಣೆ ಆಗಿದೆ. ನಿರ್ಮಾಣ್ ಇಂಡಿಯಾ ಬಿಲ್ಡರ್ಸ್‌ಗೆ ₹30,000 ಹಾಗೂ ಮುಬಾರಕ್ ಹುಸೇನ್ ಎಂಬ ವ್ಯಕ್ತಿಗೆ ₹24,000 ವರ್ಗಾವಣೆ ಆಗಿದೆ. ಅದರಲ್ಲಿ ಅವರ ಯಾವುದೇ ವಿವರಣೆ ಇಲ್ಲ. ಈ ಬಗೆಯ ವಂಚನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ