ಆರ್ಯವೈಶ್ಯ ಕುಲಗುರುಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಎರಡನೇ ಪೀಠಾರೋಹಣ ಕಾರ್ಯಕ್ರಮವು ಇದೇ ತಿಂಗಳ 20-6-2021 ನೇ ಬಾನುವಾರ ಬೆಂಗಳೂರಿನ ಮಲ್ಲೇಶ್ವರಂ ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಇನ್ನೂ ಈ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ಆರ್ಯವೈಶ್ಯ ಸಂಘ ದವತಿಯಿಂದ ಇಂದು ಚತ್ರದುರ್ಗ ನಗರದ ಚಿಕ್ಕಪೇಟೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ ಜಿಲ್ಲಾ ಆರ್ಯ ವೈಶ್ಯ ಸಂಘದ ವತಿಯಿಂದ ಗೋಪೋಜೆಯನ್ನು ಮಾಡಲಾಯಿತು. ತಮ್ಮ ಗುರುಗಳ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಎರಡನೆ ಪೀಠಾರೋಹಣದ ಹಿನ್ನೆಲೆ ಜಿಲ್ಲೆಯ ಆರ್ಯ ವೈಶ್ಯ ಸಂಘದ ಕುಟುಂಬದವರಿಂದ ಗೋಪೂಜೆಯನ್ನ ನಡೆಸಲಾಗಿದ್ದು ಇದೇ ವೇಳೆಯಲ್ಲಿ ತಮ್ಮ ಗುರುಗಳಿಗೆ ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸಂಘದ ಸದಸ್ಯರು ಕೇಳಿಕೊಂಡರು. ಇನ್ನೂ ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಎಲ್.ಆರ್.ವೆಂಕಟೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಯವೈಶ್ಯ ಸಂಘದ ಸದಸ್ಯರು ಭಾಗವಹಿಸಿದ್ದರು.