ಪ್ರಕೃತಿಯ ಕೋಪಕ್ಕೆ ನಲುಗಿದ ನೇಪಾಳ: ಕಣ್ಣೀರಿನ ಕಥೆ ಹೇಳುವ ಭೀಕರ ಚಿತ್ರಗಳು

ಪ್ರಕೃತಿಯ ಕೋಪಕ್ಕೆ ನಲುಗಿದ ನೇಪಾಳ: ಕಣ್ಣೀರಿನ ಕಥೆ ಹೇಳುವ ಭೀಕರ ಚಿತ್ರಗಳು

ಪ್ರಕೃತಿಯ ಕೋಪಕ್ಕೆ ನಲುಗಿದ ನೇಪಾಳ: ಕಣ್ಣೀರಿನ ಕಥೆ ಹೇಳುವ ಭೀಕರ ಚಿತ್ರಗಳು

ಟಿಬೆಟ್‌ನ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್‌ ಪ್ರವಾಹವು ನೇಪಾಳದ ನುವಾಕೋಟ್‌ ಮತ್ತು ಧಾಡಿಂಗ್‌ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟುಮಾಡಿದೆ

ಟಿಬೆಟ್‌ ಗಡಿಯಿಂದ ರಭಸವಾಗಿ ನುಗ್ಗಿದ ಕೆಸರುಮಿಶ್ರಿತ ನೀರಿನಲ್ಲಿ ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ

ಕೆಸರು, ಕಲ್ಲುಗಳು, ಕಟ್ಟಡಗಳ ಅವಶೇಷಗಳೊಂದಿಗೆ ನುಗ್ಗುತ್ತಿರುವ ನೀರು ಭೋಟೆ ಕೋಶಿ ನದಿ ಪಾತ್ರದುದ್ದಕ್ಕೂ ಹಾನಿ ಉಂಟುಮಾಡುತ್ತಿರುವುದು, ದಟ್ಟ ಮಂಜು ಆವರಿಸಿರುವ ದೃಶ್ಯಗಳು ಎದೆಝಲ್ಲೆನಿಸುವಂತಿವೆ

ಇನ್ನೊಂದೆಡೆ ಭೋರ್ಗರೆವ ನೀರು ಕಂಡು ಜನ ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸಿವೆ.

ನೇಪಾಳದ ಲೆಂಡೆ ನದಿಯಲ್ಲಿ ಹಿಮಪಾತದಿಂದ ಉಂಟಾದ ದಿಢೀರ್‌ ಪ್ರವಾಹವು ಕೆಲವೇ ಕ್ಷಣಗಳಲ್ಲಿ ರಸುವಾ, ನುವಾಕೋಟ್‌, ಧಾಡಿಂಗ್‌ ಜಿಲ್ಲೆಗಳಲ್ಲಿ  ಅಪಾರ ಹಾನಿ ಉಂಟು ಮಾಡಿದೆ.

ಮನೆ, ನೆಲೆ ಎಲ್ಲವನ್ನೂ ಕಳೆದುಕೊಂಡ ಜನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ದಿಕ್ಕೆಟ್ಟಿದ್ದರು.

ತ್ರಿಶೂಲಿ, ಭೋಟೆ ಕೋಶಿ ನದಿಯ ಮೂಲಕ ರಭಸವಾಗಿ ಹರಿದ ಕೆಸರು ಮಿಶ್ರಿತ ನೀರಿನಲ್ಲಿ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ

ನೇಪಾಳ–ಚೀನಾ ಗಡಿಯ ಈಶಾನ್ಯಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ಲೆಂಡೆ ಖೋಲಾ ನದಿಯಲ್ಲಿ ಸಂಭವಿಸಿದ ಹಿಮಪಾತವೇ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.

‘ಪ್ರವಾಹವು ಭೀಕರವಾಗಿದೆ. ಅದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹಾನಿ ಮಾಡಿರಬಹುದು’ ಎಂದು ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್‌ ಕಫ್ಲೆ ಹೇಳಿದ್ದಾರೆ.

ಕೆಸರು ಮಿಶ್ರಿತ ನೀರಿನಲ್ಲಿ ಅನೇಕ ವಾಹನಗಳು ಹೂತುಹೋಗಿದ್ದವು

ಭೋರ್ಗರೆವ ಕೆಸರು ನೀರಿನಿಂದ ಜೀವ ಉಳಿಸಿಕೊಳ್ಳಲು ಜೆಸಿಬಿ ಏರಿ ಹೊರಟ ಜನ

ನದಿ ನೀರಿನ ರಭಸಕ್ಕೆ ಸೇತುವೆಯೊಂದು ಕೊಚ್ಚಿಹೋಗಿ, ಗ್ರಾಮದ ಸಂಪರ್ಕ ಕಡಿತಗೊಂಡಿದೆ

ಕೆಸರು, ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದು

ನೇಪಾಳ ಸೇನೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸೇನೆಯ ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಚಿನಕುರುಳಿ: ಬುಧವಾರ, 26 ಆಗಸ್ಟ್ 2026

ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ

‘ಟಾಕ್ಸಿಕ್‌’ ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ

ಭಾರತದಲ್ಲಿ 3.41 ಲಕ್ಷ ಫುಟ್‌ಬಾಲ್‌ ಆಟಗಾರರು

ಫುಟ್‌ಬಾಲ್‌: ಪನಾಮ ವಿರುದ್ಧ ಸೌಹಾರ್ದ ಪಂದ್ಯ

ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌: ಸೆ.28ಕ್ಕೆ ಶ್ರೇಯಸ್‌ ಪಡೆ ಕಣಕ್ಕೆ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಎಚ್‌ವೈಸಿ ತಂಡ ಚಾಂಪಿಯನ್

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು

ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು

ಒಳನೋಟ | ಆರ್ಥಿಕ ಹೊರೆ: ಸಮಾಜಕ್ಕೆ ಬರೆ

ಒಳನೋಟ | ಕ್ರೀಡಾ ಸೌಕರ್ಯ, ಪ್ರಾದೇಶಿಕ ಅಸಮಾನತೆ: ಸಿಎಜಿ ವರದಿಯಲ್ಲಿ ಬಹಿರಂಗ

ಚಿನಕುರುಳಿ: ಬುಧವಾರ, 26 ಆಗಸ್ಟ್ 2026

ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ

‘ಟಾಕ್ಸಿಕ್‌’ ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ