
ಕ್ಷುಲಕ ಕಾರಣಕ್ಕೆ ಜಗಳ: ಮೂವರಿಗೆ ಗಾಯ, ಆರು ಜನರ ವಿರುದ್ಧ ಪ್ರಕರಣ ದಾಖಲು
ತಾವರಗೇರಾ: ಸಮೀಪದ ಪುರ ಗ್ರಾಮದಲ್ಲಿ ಸೋಮವಾರ ಸಂಜೆ ಕ್ಷುಲಕ ಕಾರಣದಿಂದ ನಡೆದ ಜಗಳದಲ್ಲಿ ಗ್ರಾಮದ ಸೋಮಣ್ಣ ಮಡಿವಾಳ, ಬಾಲಪ್ಪ ಮಡಿವಾಳ, ದೊಡ್ಡಪ್ಪ ಎಂಬುವವರು ಗಾಯಗೊಂಡಿದ್ದಾರೆ.
ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಈ ಸಮಯದಲ್ಲಿ ಮರಳು ತುಂಬಿದ ಲಾರಿ ಅದೇ ರಸ್ತೆಯಲ್ಲಿ ಬಂದಾಗ, ಅಲ್ಲೇ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಸ್ಪರ್ಶಿಸಿದೆ. ನಂತರ ಲಾರಿ ಚಾಲಕ ಚಂದ್ರು ಮತ್ತು ದ್ವಿಚಕ್ರ ವಾಹನ ಸವಾರ ಸೋಮಣ್ಣ ನಡುವೆ ವಾಗ್ದಾನ ನಡೆದಿದೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಗಾಯಾಳು ಸೋಮಣ್ಣ ತಿಳಿಸಿದರು.
ಸ್ಥಳೀಯ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. 6 ಜನರ ವಿರುದ್ಧ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-35-1946193175