
ಪ್ರಜಾಸೇವಾ ಆಂದೋಲನ| ಜನರ ಸಮಸ್ಯೆಯನ್ನು ಸಕಾಲದಲ್ಲಿ ಪರಿಹರಿಸಿ: ಶಾಸಕ ರಮೇಶ
ಮಂಡ್ಯ: ರೈತರ ಜಮೀನು ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೂಚಿಸಿದರು. ತಾಲ್ಲೂಕಿನ ಕೊತ್ತತ್ತಿ-1ನೇ ಹೋಬಳಿಯ ಕೊತ್ತತ್ತಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದಲ್ಲಿ 1960ಕ್ಕೂ ಹಿಂದಿನಿಂದಲೂ ಕೆಲವು ಕುಟುಂಬ ಗಳು ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಕೆಲವರ ಬಳಿ ಅಗತ್ಯ ದಾಖಲೆಗಳಿವೆ. ಕೆಲ ಕುಟುಂಬಗಳ ಬಳಿ ದಾಖಲೆಗಳ ಕೊರತೆಯಿ ರುವುದರಿಂದ ವ್ಯಾಜ್ಯಗಳು ಉಂಟಾಗಿವೆ. ಕಂದಾಯ ದಾಖಲೆ ಪರಿಶೀಲಿಸಿ, ಅರ್ಹ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಿ ಎಂದರು. ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಭಾಗವಹಿಸಿದ್ದರು.