
ಸ್ಪೈಡರ್ ಮ್ಯಾನ್ ಜ್ಯೋತಿರಾಜ್ಗೆ ವಿವಾಹ ಸಂಭ್ರಮ, ನಿವೇದಿತಾ ಜೊತೆ ಮದುವೆ
ಚಿತ್ರದುರ್ಗ: ‘ಕರ್ನಾಟಕದ ಸ್ಪೈಡರ್ ಮ್ಯಾನ್’, ‘ಮಂಕಿ ಮ್ಯಾನ್’, ‘ಕೋತಿರಾಜ್’ ಎಂದೇ ಹೆಸರಾಗಿರುವ ಸಾಹಸಿಗ ಜ್ಯೋತಿರಾಜ್ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಅಕ್ಕನ ಮಗಳು ನಿವೇದಿತಾ ಅವರೊಂದಿಗೆ ಆ.22, 23ರಂದು ನಗರದಲ್ಲಿ ಜೊತೆಯಾಗಲಿದ್ದಾರೆ.
ಕಲ್ಲಿನಕೋಟೆ, ಬಂಡೆ, ಗುಡ್ಡಗಳನ್ನು ಕೆಲವೇ ನಿಮಿಷಗಳಲ್ಲಿ ಹತ್ತುವ ಜ್ಯೋತಿರಾಜ್, ದೇಶ– ವಿದೇಶ ಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಜೋಗ ಜಲಪಾತ ಸೇರಿದಂತೆ ವಿವಿಧ ಬೆಟ್ಟ–ಗುಡ್ಡಗಳ ಚಾರಣದ ಸಂದರ್ಭ ತಪ್ಪಿಸಿಕೊಂಡ ಅನೇಕರ ಜೀವ ಉಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಾಹಸ ಪರಿಗಣಿಸಿರುವ ಒಡಿಶಾ ಸರ್ಕಾರ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಯಭಾರಿಯಾಗಿ ಆಯ್ಕೆ ಮಾಡಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-42-457575665