ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ರಾಜಕೀಯ ಅಖಾಡಕ್ಕೆ ಧುಮುಕಲು ಸನ್ನದ್ಧರಾಗಿದ್ದಾರೆ. ಆಪ್ತರನ್ನು ಬಿಜೆಪಿಯಿಂದ ತನ್ನ ಪಕ್ಷಕ್ಕೆ ಸೆಳೆದುಕೊಳ್ಳುವ ಕೆಲಸವೂ ನಡೆಯುತ್ತಿದೆ. ಆದರೆ ಇದರ ನಡುವೆ ಜನಾರ್ದನ ರೆಡ್ಡಿ ಸಹೋದರರೇ ಬೇಸರ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಪದಿಂದಾನೆ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ, ಹೊಸ ಪಕ್ಷ ಆರಂಭಿಸುವುದು ಬೇಡ ಎಂದರೂ ಕೇಳಲಿಲ್ಲ. ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ತಪ್ಪಾಗಿದೆ. ಮತ್ತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಅವತ್ತು ರೆಡ್ಡಿಗಾಗಿ ಚುನಾವಣೆಯಲ್ಲಿ ನ್ಯೂಟ್ರಲ್ ಆಗಿದ್ದೆ. ಆದರೆ ಈ ಬಾರಿ ಬಳ್ಳಾರಿಯಿಂದಾನೇ ಸ್ಪರ್ಧಿಸುತ್ತೇನೆ.
ರಾಜಕೀಯದಲ್ಲಿ ಯಾವತ್ತಿಗೂ ತಾಳ್ಮೆ ಇರಬೇಕು. ಇಲ್ಲಂದ್ರೆ ರೇಡ್ ಆಗುತ್ತೇವೆ. ಪಕ್ಷ ಸ್ಥಾಪನೆ ಮಾಡಿದ್ದಕ್ಕೆ ಆಸ್ತಿ ಜಪ್ತಿಯಾಗುತ್ತಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದೆ. ಅವು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತಾರೆ ಎಂದಿದ್ದಾರೆ.
The post ಜನಾರ್ದನ ರೆಡ್ಡಿ ಪಕ್ಷ ಸ್ಥಾಪಿಸಿದ್ದಕ್ಕೆ ಟಾರ್ಗೆಟ್ ಅಗಿದ್ದಾರಾ..? : ಸೋಮಶೇಖರ್ ರೆಡ್ಡಿ ಹೇಳಿದ್ದೇನು..? first appeared on Kannada News | suddione.
source https://suddione.com/janardhana-reddy-is-a-target-for-the-partys-establishment-what-did-somasekhar-reddy-say-2/