
ಕರ್ನಾಟಕ ಬಂದ್ | ಪ್ರತಿಭಟನಕಾರರಿಲ್ಲದ ಪುರಭವನ: ನೂರಾರು ಪೊಲೀಸರ ಕಾವಲು
ಬೆಂಗಳೂರು: ಕರ್ನಾಟಕ ಬಂದ್ ಪ್ರಯುಕ್ತ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದರಿಂದ, ಪುರಭವನದಲ್ಲಿ ಪ್ರತಿಭಟನಾಕಾರರ ಸುಳಿವೇ ಇಲ್ಲದಂತಾಗಿದೆ.
ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ನಡೆಸುವುದಾಗಿ ಒಕ್ಕೂಟ ತಿಳಿಸಿತ್ತು. ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಜೊತೆಗೆ, ಪ್ರತಿಭಟನಾಕಾರರನ್ನು ಮುಂಚಿತವಾಗಿಯೇ ಪೊಲೀಸರು ವಶಕ್ಕೆ ಪಡೆದಿದ್ದರು.
ಪುರಭವನದ ಸುತ್ತಮುತ್ತ ಕಂಡು ಬರುವ ಕನ್ನಡಪರ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆಯುತ್ತಿರುವುದರಿಂದ, ಪ್ರತಿಭಟನೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.