ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಬಹುಕಾಲದ ಕನಸು ಇದೀಗ ನನಸಾಗಿದ್ದು, ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂರು ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಖಾಯಂ ಸೇವೆಗಳಾಗಿ ಪರಿವರ್ತಿಸಲು ನಿರ್ಧರಿಸಿದೆ. ಈ ಕ್ರಮದಿಂದ ರಾಜ್ಯದ ಎಂಟು ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಪ್ರಯೋಜನವಾಗಲಿದೆ.ಈ ಹಿಂದೆ ‘ವಿಶೇಷ ರೈಲು’ಗಳಾಗಿ ಸಂಚರಿಸುತ್ತಿದ್ದ ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಖಾಯಂ ರೈಲುಗಳಾಗಿ ಘೋಷಿಸಿರುವುದರಿಂದ ಆ ಹೆಚ್ಚುವರಿ ಶುಲ್ಕ ರದ್ದಾಗಿದ್ದು, ಸ್ಲೀಪರ್ ಮತ್ತು ಎಸಿ ಬೋಗಿಗಳ ಟಿಕೆಟ್ ದರದಲ್ಲಿ ಶೇ. 25ರಿಂದ 30ರವರೆಗೆ ಇಳಿಕೆಯಾಗಲಿದೆ.
ಈ ರೈಲುಗಳ ಮೂಲಕ ಬೆಳಗಾವಿ, ಧಾರವಾಡ (ಹುಬ್ಬಳ್ಳಿ), ಗದಗ, ಕೊಪ್ಪಳ, ವಿಜಯನಗರ (ಹೊಸಪೇಟೆ), ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನರಿಗೆ ಹೈದರಾಬಾದ್ ಹಾಗೂ ಸಿಕಂದರಾಬಾದ್ ನಗರಗಳಿಗೆ ಸಂಪರ್ಕ ಸುಲಭವಾಗಲಿದೆ.
ರೈಲುಗಳ ವೇಳಾಪಟ್ಟಿ:
17071: ಹೈದರಾಬಾದ್ – ಬೆಳಗಾವಿ (ಗುರುವಾರ ಸಂಜೆ 4:30, ಶುಕ್ರವಾರ ಬೆಳಗ್ಗೆ 10:30)
17072: ಬೆಳಗಾವಿ – ಹೈದರಾಬಾದ್ (ಶುಕ್ರವಾರ ಮಧ್ಯಾಹ್ನ 1:00, ಶನಿವಾರ ಬೆಳಗ್ಗೆ 7:00)
17073: ಸಿಕಂದರಾಬಾದ್ – ಬೆಳಗಾವಿ (ಸೋಮವಾರ ಸಂಜೆ 4:30, ಮಂಗಳವಾರ ಬೆಳಗ್ಗೆ 10:30)
17074: ಬೆಳಗಾವಿ – ಸಿಕಂದರಾಬಾದ್ (ಮಂಗಳವಾರ ಮಧ್ಯಾಹ್ನ 1:00, ಬುಧವಾರ ಬೆಳಗ್ಗೆ 7:15)
17075: ಚೇರ್ಲಪಲ್ಲಿ – ಬೆಳಗಾವಿ (ಶನಿವಾರ ಸಂಜೆ 4:00, ಭಾನುವಾರ ಬೆಳಗ್ಗೆ 10:30)
17076: ಬೆಳಗಾವಿ – ಚೇರ್ಲಪಲ್ಲಿ (ಭಾನುವಾರ ಮಧ್ಯಾಹ್ನ 1:00, ಸೋಮವಾರ ಬೆಳಗ್ಗೆ 8:45)
ದೀರ್ಘಕಾಲದ ಬೇಡಿಕೆಯಾಗಿದ್ದ ಈ ರೈಲು ಸೇವೆಗಳನ್ನು ಖಾಯಂ ಮಾಡಿರುವುದರಿಂದ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಸುಗಮ ಹಾಗೂ ಆರಾಮದಾಯಕ ಪ್ರಯಾಣ ಸಾಧ್ಯವಾಗಲಿದೆ.








source https://suddione.com/rail-facilities-expanded-to-north-karnataka-three-trains-made-permanent/


0 Comments
If u have any queries, Please let us know