ಆಗಸ್ಟ್ 07ರಂದು ಹಿರಿಯೂರಿಗೆ ಯಾದವ ರಥಯಾತ್ರೆ ಆಗಮನ

ಸುದ್ದಿಒನ್, ಹಿರಿಯೂರು, ಆಗಸ್ಟ್. 05 : ಅಖಿಲ ಭಾರತ ಯಾದವ ಮಹಾಸಭಾ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಯಾದವ ಕಳಸ ಯಾತ್ರೆ ಆಗಸ್ಟ್ 07ರಂದು ಹಿರಿಯೂರು ನಗರ ಪ್ರವೇಶಿಸಲಿದೆ ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1962ರಲ್ಲಿ ಭಾರತ ಮತ್ತು ಚೀನಾ ನಡುವಿನ ರಜಾಂಗ್ -ಲಾ- ಕದನದಲ್ಲಿ ವೀರ ಮರಣ ಹೊಂದಿದ 120ಕ್ಕೂ ಹೆಚ್ಚು ಯಾದವ ಸಮಾಜದ ಹುತಾತ್ಮರಿಗೆ ಗೌರವ ಸಮರ್ಪಣೆಗಾಗಿ ಹಾಗೂ ಅಖಿಲ ಭಾರತೀಯ ಸೈನ್ಯದಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸಲಿದೆ.

ಈ ನಿಟ್ಟಿನಲ್ಲಿ ಕಳಸ ಯಾತ್ರೆಯು ಆಗಸ್ಟ್ 7ರಂದು ಗುರುವಾರ ಹಿರಿಯೂರಿಗೆ ಆಗಮಿಸಲಿದ್ದು, ತಾಲೂಕಿನ ಜವನಗೊಂಡನಹಳ್ಳಿ ಶ್ರೀ ಕೃಷ್ಣ ದೇವಾಲಯ ಆವರಣಕ್ಕೆ ಆಗಮಿಸಲಿದೆ. ಬಳಿಕ ನಗರದ ರಂಜಿತಾ ಹೋಟೆಲ್ ನಿಂದ ಗಾಂಧಿ ವೃತ್ತ, ಟಿಬಿ ಸರ್ಕಲ್ ಮೂಲಕ ವೇದಾವತಿ ನಗರದ ಶ್ರೀಕೃಷ್ಣ ದೇವಾಲಯ ತಲುಪಿ ಅಲ್ಲಿಂದ ಚಿತ್ರದುರ್ಗದ ಶ್ರೀ ಕೃಷ್ಣ ಮಠಕ್ಕೆ ತಲುಪಲಿದೆ. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ತಾಲ್ಲೂಕಿನ ಗೊಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆರ್. ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ