ಮುಂಗಾರು ಮಳೆ ಕೊರತೆಗೆ “ಎಲ್‌ ನಿನೊ” ಮಾರಕವೆ ?

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821

ಸುದ್ದಿಒನ್, ಜೂನ್‌. 21 :
ಕರ್ನಾಟಕದಲ್ಲಿ ಪ್ರಸ್ತುತ ವರ್ಷ ಮುಂಗಾರು ಮಳೆಯ ಆರಂಭದಿಂದಲೇ ದುರ್ಬಲಗೊಂಡಿರುವುದಕ್ಕೆ ಮುಖ್ಯ ಕಾರಣ “ಎಲ್‌ ನಿನೋ” (EL Nino) ಪ್ರಭಾವ, ಇದರ ಜೊತೆಗೆ ಮಾರುತಗಳ ದಿಕ್ಕುಗಳಲ್ಲಿನ ಬದಲಾವಣೆ ಆಗು ಅರೇಬಿಯನ್‌ ಸಮುದ್ರದಲ್ಲಿ ಅಗತ್ಯವಾದ ತೇವಾಂಶ ಮತ್ತು ಮೊಡಗಳ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.

ಕರ್ನಾಟಕದಲ್ಲಿ ಮಳೆಯ ಕೊರತೆಯಾಗಲು ಮುಖ್ಯ ಕಾರಣಗಳೇನೆಂದರೆ ಪೆಸಿಪಿಕ್‌ ಮಹಾಸಾಗರದಲ್ಲಿ ತಾಪಮಾನ ಹೆಚ್ಚಳದಿಂದಾಗಿ ಉಂಟಾಗುವ ಎಲ್‌ ನಿನೊ ವಿದ್ಯಾಮಾನವು ಭಾರತದ ಮುಂಗಾರು ಮಾರತಗಳನ್ನು ದುರ್ಬಲಗೊಳಿಸುತ್ತದೆ. ಇದು ಮಳೆಯ ಮೊಡಗಳು ದಕ್ಷಿಣ ಭಾರತದ ಕಡೆಗೆ ಸರಿಯಲು ಅಡ್ಡಿಪಡಿಸುತ್ತದೆ. ಅರೇಬಿಯನ್‌ ಸಮುದ್ರದಿಂದ ಬೀಸುವ ತೇವಾಂಶ ಭರಿತ ಗಾಳಿಯ ವೇಗ ಮತ್ತು ತೀವ್ರತೆ ತಗ್ಗುವುದರಿಂದ ಕರ್ನಾಟಕದ ಪ್ರದೇಶದ ಮುಂಗಾರು ಮಾರುತಗಳ ಸ್ಥಗಿತಗೊಂಡಿವೆ. ಸಾಮಾನ್ಯವಾಗಿ ಹೆಚ್ಚು ಮಳೆ ಪಡೆಯುವ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೊಡಗಳು ಕಾಣಿಸದೆ ಮಳೆ ಕೊರತೆ ಉಂಟಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ ಶೇ. 21ರಷ್ಟು ಮಲೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಲ್ಲಿ ಮಳೆ ಪ್ರಮಾಣವು ಸರಾಸರಿಗಿಂತ ಕಡಿಮೆಯಾಗಲಿದೆ ಎಂದು ಹೆಚ್ಚರಿಸಿದ್ದು, ಕಾವೇರಿ ಮತ್ತು ಇತರ ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗಲು ಇದು ನೇರ ಕಾರಣವಾಗಿದೆ.

ರಾಜ್ಯದಲ್ಲಿ ಮಳೆ ವಿಳಂಬವಾಗಿರುವುದರಿಂದ ಮತ್ತು ಬಿತ್ತನೆ ಸಮಯದಲ್ಲಿ ನೀರಿನ ಕೊರತೆಯಾಗುವುದರಿಂದ ಬಿತ್ತನೆ ಕ್ಷೇತ್ರ ಕಡಿಮೆಯಾಗಿ ಕೃಷಿ ಉತ್ಪಾದನೆಗೆ ಭಾರಿ ನಷ್ಟವಾಗುತ್ತಿದೆ ಹಾಗೂ ರಾಜ್ಯದಲ್ಲಿನ ತಾಪಮಾನದಲ್ಲಿ ಹೆಚ್ಚು ಕಂಡುಬರುತ್ತಿದೆ. ಮಳೆಗಾಲದಲ್ಲಿ ಸಹ ಬಿಸಿಲಿನ ತಾಪ ಮತ್ತು ತೇವಾಂಶದ ಕೊರತೆಯಿಂದಾಗಿ ಜನರು ತೀವ್ರ ಹವಾಮಾನ ಒತ್ತಡವನ್ನು ಎದುರಿಸಬೇಕಾಗಿರುತ್ತದೆ. ಭವಿಷ್ಯದಲ್ಲಿ ಮಳೆಯ ಪ್ರಮಾಣ ಏರಿಳಿತಗಳಿಂದ ಕೂಡಿದ್ದು, ಒಟ್ಟಾರೆ ವಾರ್ಷಿಕ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ.

ಭವಿಷ್ಯದಲ್ಲಿ ಮಳೆಯ ಪ್ರಮಾಣ ಏರಿಳಿತಗಳಿಂದ ಕೂಡಿದ್ದು, ಒಟ್ಟಾರೆ ವಾರ್ಷಿಕ ಮಳೆ ಕಡಿಮೆಯಾದರೂ ಕೆಲವೊಮ್ಮೆ ಅಲ್ಪಾವಧಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಇದು ಪ್ರವಾಹ ಅಥವಾ ಬರಗಾಲಕ್ಕೆ ಕಾರಣವಾಗಬಹುದು.

 



source https://suddione.com/el-nino-for-lack-of-monsoon-rains/

Post a Comment

0 Comments