ದೆಹಲಿ: ಸಿಎಂ ಬದಲಾವಣೆಯ ಚರ್ಚೆ ಅಂತು ಈಗ ಇನ್ನಷ್ಟು ಜಾಸ್ತಿಯಾಗಿದೆ. ಡಿಕೆ ಬ್ರದರ್ಸ್ ಅದಕ್ಕಾಗಿ ಪಟ್ಟು ಹಿಡಿದು ಬೆಂಗಳೂರು ಟು ದೆಹಲಿ ಓಡಾಟ ನಡೆಸ್ತಾ ಇದ್ದಾರೆ. ಇದೀಗ ದೆಹಲಿಗೆ ಭೇಟಿ ನೀಡಿರುವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನ್ನಾಡಿದ್ದಾರೆ.
ವರಿಷ್ಠರನ್ನ ಭೇಟಿ ಮಾಡಿದ ಬಳಿಕ, ದೆಹಲಿಗೆ ಬಂದಾಗ ಎಲ್ಲರನ್ನು ಭೇಟಿ ಮಾಡಬೇಕು. ಅದು ವಾಡಿಕೆ. ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿಯಾಗ್ತೇನೆ. ಸಂಪುಟ ಪುನರ್ ರಚನೆ ವಿಚಾರ, ಸಿಎಂ ಬದಲಾವಣೆ ವಿಚಾರವೆಲ್ಲಾ ಹೈಕಮಾಂಡ್ ಮಾಡಬೇಕು. ಹೈಕಮಾಂಡ್ ಗಮನಕ್ಕೆ ಸುಮಾರು ಸಲ ತಂದಿದ್ದೇವೆ. ಅಂತಿಮವಾಗಿ ಅವರು ನಿರ್ಧಾರ ಮಾಡಬೇಕು. ನಿನ್ನೆ ಕೂಡ ಹೇಳಿದ್ದೇವೆ. ಇದು ಬೇಗ ಇತ್ಯರ್ಥ ಆಗಬೇಕು ಅಂತ. ಗೊಂದಲ ನಿಲ್ಲಬೇಕು ಅಂತ. ಮತ್ತೆ ಅದನ್ನೇ ಹೇಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಲ್ಲಿ ನಿರ್ಧಾರ ಮಾಡುವಂತದ್ದು ಅಲ್ಲ. ದೆಹಲಿಯಲ್ಲಿಯೇ ನಿರ್ಧಾರ ಮಾಡಬೇಕು. ಬಹುಶಃ ಈ ಚುನಾವಣೆಯ ಫಲಿತಾಂಶ ಬಂದ ನಂತರ ಮಾಡಬಹುದು. ಪರಿಹಾರ ಅಂತು ಹೇಳಲೇಬೇಕು. ಮಂತ್ರಿಗಳದ್ದು ಶಾಸಕರದ್ದು ಗೊಂದಲಗಳು ಮೊದಲು ಬಗೆಹರಿಯಬೇಕು ಎಂಬ ಮಾತನ್ನ ಹೇಳಿದ್ದಾರೆ.













source https://suddione.com/satish-jarkiholi-in-delhi-what-did-he-say-about-the-cm-change/

0 Comments
If u have any queries, Please let us know